Surah Al-Anfal Verse 41 - Kannada Translation by Abdussalam Puthige
Surah Al-Anfal۞وَٱعۡلَمُوٓاْ أَنَّمَا غَنِمۡتُم مِّن شَيۡءٖ فَأَنَّ لِلَّهِ خُمُسَهُۥ وَلِلرَّسُولِ وَلِذِي ٱلۡقُرۡبَىٰ وَٱلۡيَتَٰمَىٰ وَٱلۡمَسَٰكِينِ وَٱبۡنِ ٱلسَّبِيلِ إِن كُنتُمۡ ءَامَنتُم بِٱللَّهِ وَمَآ أَنزَلۡنَا عَلَىٰ عَبۡدِنَا يَوۡمَ ٱلۡفُرۡقَانِ يَوۡمَ ٱلۡتَقَى ٱلۡجَمۡعَانِۗ وَٱللَّهُ عَلَىٰ كُلِّ شَيۡءٖ قَدِيرٌ
(ವಿಶ್ವಾಸಿಗಳೇ,) ಅಂದು ನೀವು (ಬದ್ರ್ ಮೈದಾನದ) ಒಂದು ಕೊನೆಯಲ್ಲಿದ್ದರೆ, ಅವರು (ಶತ್ರು ಪಡೆ) ಇನ್ನೊಂದು ಕೊನೆಯಲ್ಲಿದ್ದರು ಮತ್ತು ವ್ಯಾಪಾರ ತಂಡವು ನಿಮಗಿಂತ ತಗ್ಗು ಪ್ರದೇಶದಲ್ಲಿತ್ತು. ಒಂದು ವೇಳೆ ನೀವು (ಮುಖಾಮುಖಿಗೆ) ಕಾಲ ನಿಶ್ಚಯಿಸಲು ಹೊರಟಿದ್ದರೆ ನಿಶ್ಚಿತ ಕಾಲದ ಕುರಿತು ಭಿನ್ನತೆ ತಾಳುತ್ತಿದ್ದಿರಿ. ಆದರೆ ನಾಶವಾಗುವವನು ಸ್ಪಷ್ಟ ಪುರಾವೆಯೊಂದಿಗೆ ನಾಶವಾಗಬೇಕು ಮತ್ತು ಬದುಕಿ ಉಳಿಯುವವನು ಸ್ಪಷ್ಟ ಪುರಾವೆಯೊಂದಿಗೆ ಬದುಕಿ ಉಳಿಯಬೇಕೆಂಬ ತನ್ನ ನಿರ್ಧಾರವನ್ನು ಅಲ್ಲಾಹನು ಸಾಧಿಸಿ ತೋರಿಸ ಬಯಸಿದ್ದನು. ಅಲ್ಲಾಹನಂತು ಖಂಡಿತವಾಗಿಯೂ ಎಲ್ಲವನ್ನೂ ಕೇಳುವವನು ಮತ್ತು ಅರಿಯುವವನಾಗಿದ್ದಾನೆ