Surah Al-Hashr - Kannada Translation by Abdussalam Puthige
سَبَّحَ لِلَّهِ مَا فِي ٱلسَّمَٰوَٰتِ وَمَا فِي ٱلۡأَرۡضِۖ وَهُوَ ٱلۡعَزِيزُ ٱلۡحَكِيمُ
ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಇರುವವರು ಅಲ್ಲಾಹ್ ಮತ್ತು ಅವನ ದೂತರ ಶತ್ರುಗಳೊಂದಿಗೆ ಸ್ನೇಹ ಬೆಳೆಸುವುದನ್ನು ನೀವೆಂದೂ ಕಾಣಲಾರಿರಿ – ಅವರು, ತಮ್ಮ ಹೆತ್ತವರು ಅಥವಾ ತಮ್ಮ ಪುತ್ರರು ಅಥವಾ ತಮ್ಮ ಸಹೋದರರು ಅಥವಾ ತಮ್ಮ ಬಂಧುಗಳಾಗಿದ್ದರೂ ಸರಿಯೇ. ಅಲ್ಲಾಹನು ಅವರ ಮನಸ್ಸುಗಳಲ್ಲಿ ವಿಶ್ವಾಸದ ಮುದ್ರೆಯೊತ್ತಿ ಬಿಟ್ಟಿರುವನು ಮತ್ತು ಅವನು ತನ್ನ ಕಡೆಯಿಂದ ವಿಶೇಷ ಚೈತನ್ಯವನ್ನೊದಗಿಸಿ ಅವರಿಗೆ ನೆರವಾಗಿರುವನು. ಮತ್ತು ಅವನು ಅವರನ್ನು, ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗ ತೋಟಗಳೊಳಗೆ ಸೇರಿಸುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಅಲ್ಲಾಹನು ಅವರಿಂದ ಸಂತುಷ್ಟನಾಗಿರುವನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಅವರೇ ಅಲ್ಲಾಹನ ಬಳಗದವರು. ನಿಮಗೆ ತಿಳಿದಿರಲಿ, ಅಲ್ಲಾಹನ ಬಳಗದವರೇ ವಿಜಯಿಗಳಾಗುವರು
Surah Al-Hashr, Verse 1
هُوَ ٱلَّذِيٓ أَخۡرَجَ ٱلَّذِينَ كَفَرُواْ مِنۡ أَهۡلِ ٱلۡكِتَٰبِ مِن دِيَٰرِهِمۡ لِأَوَّلِ ٱلۡحَشۡرِۚ مَا ظَنَنتُمۡ أَن يَخۡرُجُواْۖ وَظَنُّوٓاْ أَنَّهُم مَّانِعَتُهُمۡ حُصُونُهُم مِّنَ ٱللَّهِ فَأَتَىٰهُمُ ٱللَّهُ مِنۡ حَيۡثُ لَمۡ يَحۡتَسِبُواْۖ وَقَذَفَ فِي قُلُوبِهِمُ ٱلرُّعۡبَۚ يُخۡرِبُونَ بُيُوتَهُم بِأَيۡدِيهِمۡ وَأَيۡدِي ٱلۡمُؤۡمِنِينَ فَٱعۡتَبِرُواْ يَـٰٓأُوْلِي ٱلۡأَبۡصَٰرِ
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ
Surah Al-Hashr, Verse 2
وَلَوۡلَآ أَن كَتَبَ ٱللَّهُ عَلَيۡهِمُ ٱلۡجَلَآءَ لَعَذَّبَهُمۡ فِي ٱلدُّنۡيَاۖ وَلَهُمۡ فِي ٱلۡأٓخِرَةِ عَذَابُ ٱلنَّارِ
ಅವನೇ, ಗ್ರಂಥದವರಲ್ಲಿನ ಧಿಕ್ಕಾರಿಗಳನ್ನು ಪ್ರಥಮ ಉಚ್ಚಾಟನೆಯ ವೇಳೆ ಅವರ ಮನೆಗಳಿಂದ ಹೊರಡಿಸಿದವನು. ಅವರು ಹೊರಡುವರೆಂದು ನೀವೆಂದೂ ಭಾವಿಸಿರಲಿಲ್ಲ. ಅತ್ತ ಅವರು, ತಮ್ಮ ಕೋಟೆಗಳು ತಮ್ಮನ್ನು ಅಲ್ಲಾಹನಿಂದ ರಕ್ಷಿಸಬಲ್ಲವೆಂದು ಭಾವಿಸಿ ಕೊಂಡಿದ್ದರು. ಆದರೆ ಅಲ್ಲಾಹನು ಅವರೆಂದೂ ಊಹಿಸಿಲ್ಲದ ಕಡೆಯಿಂದ ಅವರ ಬಳಿಗೆ ಬಂದನು – ಮತ್ತು ಅವರ ಮನಸ್ಸುಗಳಲ್ಲಿ ಭೀತಿಯನ್ನು ಬಿತ್ತಿದನು. (ಇದರ ಫಲವಾಗಿ) ಅವರು ಸ್ವತಃ ತಮ್ಮ ಕೈಗಳಿಂದ ತಮ್ಮ ನಿವಾಸಗಳನ್ನು ಕೆಡವಿ ಹಾಕ ತೊಡಗಿದರು. ವಿಶ್ವಾಸಿಗಳ ಕೈಗಳಿಂದಲೂ (ಅದನ್ನೇ ಮಾಡಿಸಲಾಯಿತು). ದೃಷ್ಟಿಯುಳ್ಳವರೇ, ಪಾಠ ಕಲಿಯಿರಿ
Surah Al-Hashr, Verse 3
ذَٰلِكَ بِأَنَّهُمۡ شَآقُّواْ ٱللَّهَ وَرَسُولَهُۥۖ وَمَن يُشَآقِّ ٱللَّهَ فَإِنَّ ٱللَّهَ شَدِيدُ ٱلۡعِقَابِ
ಒಂದು ವೇಳೆ ಅವರು ನಾಡು ಬಿಟ್ಟು ಹೋಗ ಬೇಕೆಂದು ಅಲ್ಲಾಹನು ಮೊದಲೇ ಬರೆದಿಲ್ಲದಿರುತ್ತಿದ್ದರೆ ಅವನು ಇಹ ಲೋಕದಲ್ಲೇ ಅವರನ್ನು ಖಂಡಿತ ಶಿಕ್ಷಿಸುತ್ತಿದ್ದನು. ಪರಲೋಕದಲ್ಲಂತು ಅವರಿಗೆ ನರಕಾಗ್ನಿಯ ಶಿಕ್ಷೆ ಇದ್ದೇ ಇದೆ
Surah Al-Hashr, Verse 4
مَا قَطَعۡتُم مِّن لِّينَةٍ أَوۡ تَرَكۡتُمُوهَا قَآئِمَةً عَلَىٰٓ أُصُولِهَا فَبِإِذۡنِ ٱللَّهِ وَلِيُخۡزِيَ ٱلۡفَٰسِقِينَ
ಇದೇಕೆಂದರೆ, ಅವರು ಅಲ್ಲಾಹ್ ಮತ್ತವನ ದೂತರನ್ನು ವಿರೋಧಿಸಿದ್ದರು. ಅಲ್ಲಾಹನನ್ನು ವಿರೋಧಿಸಿದವರಿಗೆ ಅಲ್ಲಾಹನು ಖಂಡಿತ ಕಠಿಣ ಶಿಕ್ಷೆ ನೀಡುವನು
Surah Al-Hashr, Verse 5
وَمَآ أَفَآءَ ٱللَّهُ عَلَىٰ رَسُولِهِۦ مِنۡهُمۡ فَمَآ أَوۡجَفۡتُمۡ عَلَيۡهِ مِنۡ خَيۡلٖ وَلَا رِكَابٖ وَلَٰكِنَّ ٱللَّهَ يُسَلِّطُ رُسُلَهُۥ عَلَىٰ مَن يَشَآءُۚ وَٱللَّهُ عَلَىٰ كُلِّ شَيۡءٖ قَدِيرٞ
(ವಿಶ್ವಾಸಿಗಳೇ,) ನೀವು ಖರ್ಜೂರದ ಕೆಲವು ಗಿಡಗಳನ್ನು ಕಡಿದು ಹಾಕಿದ್ದು ಅಥವಾ ಕೆಲವನ್ನು ಅವುಗಳ ಕಾಂಡದಲ್ಲಿ ನಿಂತಿರಲು ಬಿಟ್ಟದ್ದು (ಇವೆರಡೂ) ಅಲ್ಲಾಹನ ಆದೇಶಕ್ಕನುಸಾರವಾಗಿತ್ತು ಹಾಗೂ ಅವಿಧೇಯರನ್ನು ಅಪಮಾನಿಸುವುದಕ್ಕಾಗಿತ್ತು
Surah Al-Hashr, Verse 6
مَّآ أَفَآءَ ٱللَّهُ عَلَىٰ رَسُولِهِۦ مِنۡ أَهۡلِ ٱلۡقُرَىٰ فَلِلَّهِ وَلِلرَّسُولِ وَلِذِي ٱلۡقُرۡبَىٰ وَٱلۡيَتَٰمَىٰ وَٱلۡمَسَٰكِينِ وَٱبۡنِ ٱلسَّبِيلِ كَيۡ لَا يَكُونَ دُولَةَۢ بَيۡنَ ٱلۡأَغۡنِيَآءِ مِنكُمۡۚ وَمَآ ءَاتَىٰكُمُ ٱلرَّسُولُ فَخُذُوهُ وَمَا نَهَىٰكُمۡ عَنۡهُ فَٱنتَهُواْۚ وَٱتَّقُواْ ٱللَّهَۖ إِنَّ ٱللَّهَ شَدِيدُ ٱلۡعِقَابِ
ಅಲ್ಲಾಹನು ಅವರಿಂದ ತನ್ನ ದೂತರಿಗೆ ಕೊಡಿಸಿದ ಸಂಪತ್ತಿಗಾಗಿ ನೀವು ನಿಮ್ಮ ಕುದುರೆಗಳನ್ನಾಗಲೀ ಒಂಟೆಗಳನ್ನಾಗಲೀ ಓಡಿಸಿಲ್ಲ. ನಿಜವಾಗಿ ಅಲ್ಲಾಹನೇ ತನ್ನ ದೂತರಿಗೆ ತಾನಿಚ್ಛಿಸಿದವರ ಮೇಲೆ ನಿಯಂತ್ರಣವನ್ನು ಕೊಟ್ಟು ಬಿಡುತ್ತಾನೆ ಮತ್ತು ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ
Surah Al-Hashr, Verse 7
لِلۡفُقَرَآءِ ٱلۡمُهَٰجِرِينَ ٱلَّذِينَ أُخۡرِجُواْ مِن دِيَٰرِهِمۡ وَأَمۡوَٰلِهِمۡ يَبۡتَغُونَ فَضۡلٗا مِّنَ ٱللَّهِ وَرِضۡوَٰنٗا وَيَنصُرُونَ ٱللَّهَ وَرَسُولَهُۥٓۚ أُوْلَـٰٓئِكَ هُمُ ٱلصَّـٰدِقُونَ
ಹಳ್ಳಿಯವರಿಂದ ಅಲ್ಲಾಹನು ತನ್ನ ದೂತರಿಗೆ ಕೊಡಿಸಿದ ಸಂಪತ್ತು ಅಲ್ಲಾಹನಿಗೆ, ದೂತರಿಗೆ, ಬಂಧುಗಳಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಸೇರಿದೆ. ಸಂಪತ್ತು ಕೇವಲ ನಿಮ್ಮ ಶ್ರೀಮಂತರ ನಡುವೆ ಸೀಮಿತವಾಗಿ ಉಳಿಯಬಾರದೆಂದು (ಇದನ್ನು ವಿಧಿಸಲಾಗಿದೆ). ದೂತರು ನಿಮಗೆ ನೀಡಿದ್ದನ್ನು ಸ್ವೀಕರಿಸಿ ಕೊಳ್ಳಿರಿ ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುತ್ತಾರೋ ಅದರಿಂದ ದೂರವಿರಿ ಮತ್ತು ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ
Surah Al-Hashr, Verse 8
وَٱلَّذِينَ تَبَوَّءُو ٱلدَّارَ وَٱلۡإِيمَٰنَ مِن قَبۡلِهِمۡ يُحِبُّونَ مَنۡ هَاجَرَ إِلَيۡهِمۡ وَلَا يَجِدُونَ فِي صُدُورِهِمۡ حَاجَةٗ مِّمَّآ أُوتُواْ وَيُؤۡثِرُونَ عَلَىٰٓ أَنفُسِهِمۡ وَلَوۡ كَانَ بِهِمۡ خَصَاصَةٞۚ وَمَن يُوقَ شُحَّ نَفۡسِهِۦ فَأُوْلَـٰٓئِكَ هُمُ ٱلۡمُفۡلِحُونَ
(ಮತ್ತು ಈ ಸಂಪತ್ತು), ತಮ್ಮ ಮನೆ ಮತ್ತು ಸೊತ್ತುಗಳಿಂದ ದೂರಗೊಳಿಸಲಾದ ಬಡ ಮುಹಾಜಿರ್ಗಳಿಗೆ (ವಲಸಿಗರಿಗೆ) ಸೇರಿದೆ. ಅವರು ಅಲ್ಲಾಹನ ಅನುಗ್ರಹವನ್ನು ಮತ್ತು ಅವನ ಮೆಚ್ಚುಗೆಯನ್ನು ಅರಸುತ್ತಿರುತ್ತಾರೆ ಮತ್ತು ಅವರು ಅಲ್ಲಾಹ್ ಮತ್ತವನ ದೂತರ ಸಹಾಯಕರಾಗಿರುತ್ತಾರೆ. ಅವರೇ ಸತ್ಯವಂತರು
Surah Al-Hashr, Verse 9
وَٱلَّذِينَ جَآءُو مِنۢ بَعۡدِهِمۡ يَقُولُونَ رَبَّنَا ٱغۡفِرۡ لَنَا وَلِإِخۡوَٰنِنَا ٱلَّذِينَ سَبَقُونَا بِٱلۡإِيمَٰنِ وَلَا تَجۡعَلۡ فِي قُلُوبِنَا غِلّٗا لِّلَّذِينَ ءَامَنُواْ رَبَّنَآ إِنَّكَ رَءُوفٞ رَّحِيمٌ
ಹಾಗೆಯೇ (ಈ ಸಂಪತ್ತು) ಅವರಿಗಿಂತ (ವಲಸಿಗರಿಗಿಂತ) ಮುನ್ನ, ವಲಸೆಯ ಸ್ಥಾನ (ಮದೀನ)ದಲ್ಲಿ ನೆಲೆಸಿದ್ದ ಹಾಗೂ ವಿಶ್ವಾಸಿಗಳಾಗಿದ್ದವರಿಗೆ (ಅನ್ಸಾರ್ಗಳಿಗೆ) ಸೇರಿದೆ. ಅವರು ತಮ್ಮ ಬಳಿಗೆ ವಲಸೆ ಬಂದವರನ್ನು ಪ್ರೀತಿಸುತ್ತಾರೆ, ಅವರಿಗೆ ಏನನ್ನು ನೀಡಲಾಯಿತೋ ಆ ಕುರಿತು ಅವರು ತಮ್ಮ ಮನದಲ್ಲಿ ಆಸೆ ಪಡುವುದಿಲ್ಲ ಮತ್ತು ಸ್ವತಃ ತಾವು ಕಷ್ಟದಲ್ಲಿದ್ದರೂ ಅವರಿಗೆ (ವಲಸಿಗರಿಗೆ) ಪ್ರಾಶಸ್ತ್ಯ ನೀಡುತ್ತಾರೆ. ಮನಸ್ಸಿನ ಸಣ್ಣ ತನದಿಂದ ರಕ್ಷಿಸಲ್ಪಟ್ಟವರೇ ವಿಜಯಿಗಳು
Surah Al-Hashr, Verse 10
۞أَلَمۡ تَرَ إِلَى ٱلَّذِينَ نَافَقُواْ يَقُولُونَ لِإِخۡوَٰنِهِمُ ٱلَّذِينَ كَفَرُواْ مِنۡ أَهۡلِ ٱلۡكِتَٰبِ لَئِنۡ أُخۡرِجۡتُمۡ لَنَخۡرُجَنَّ مَعَكُمۡ وَلَا نُطِيعُ فِيكُمۡ أَحَدًا أَبَدٗا وَإِن قُوتِلۡتُمۡ لَنَنصُرَنَّكُمۡ وَٱللَّهُ يَشۡهَدُ إِنَّهُمۡ لَكَٰذِبُونَ
ಹಾಗೆಯೇ ಅದು, ಅವರ ನಂತರ ಬಂದವರಿಗೂ (ಸೇರಿದೆ). ‘‘ ನಮ್ಮೊಡೆಯಾ, ನಮ್ಮನ್ನು ಹಾಗೂ ನಮಗಿಂತ ಮುನ್ನ ವಿಶ್ವಾಸಿಗಳಾಗಿದ್ದ ನಮ್ಮ ಸಹೋದರರನ್ನು ಕ್ಷಮಿಸು. ವಿಶ್ವಾಸಿಗಳ ಕುರಿತು ನಮ್ಮ ಮನಸ್ಸುಗಳಲ್ಲಿ ಯಾವುದೇ ದುರ್ಭಾವನೆಯನ್ನು ಬೆಳೆಸಬೇಡ. ನಮ್ಮೊಡೆಯಾ ನೀನು ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿರುವೆ’’ ಎಂದು ಅವರು ಪ್ರಾರ್ಥಿಸುತ್ತಾರೆ
Surah Al-Hashr, Verse 11
لَئِنۡ أُخۡرِجُواْ لَا يَخۡرُجُونَ مَعَهُمۡ وَلَئِن قُوتِلُواْ لَا يَنصُرُونَهُمۡ وَلَئِن نَّصَرُوهُمۡ لَيُوَلُّنَّ ٱلۡأَدۡبَٰرَ ثُمَّ لَا يُنصَرُونَ
ನೀವು ಕಪಟಿಗಳನ್ನು ನೋಡಲಿಲ್ಲವೇ? ಅವರು, ಗ್ರಂಥದವರ ಪೈಕಿ ತಮ್ಮ ಧಿಕ್ಕಾರಿ ಸಹೋದರರೊಡನೆ ‘‘ಒಂದು ವೇಳೆ ನಿಮ್ಮನ್ನು (ನಾಡಿನಿಂದ) ಹೊರ ಹಾಕಲಾದರೆ ನಾವು ಕೂಡಾ ನಿಮ್ಮ ಜೊತೆ ಹೊರಡುವೆವು ಮತ್ತು ನಿಮ್ಮ ವಿಷಯದಲ್ಲಿ ನಾವೆಂದೂ ಯಾರನ್ನೂ ಅನುಸರಿಸಲಾರೆವು – ಮತ್ತು ನಿಮ್ಮ ವಿರುದ್ಧ ಯುದ್ಧ ನಡೆದರೆ ನಾವು ನಿಮಗೆ ನೆರವಾಗುವೆವು ’’ ಎಂದು ಹೇಳುತ್ತಾರೆ. ಅವರು ಸುಳ್ಳು ಹೇಳುತ್ತಿದ್ದಾರೆಂಬುದಕ್ಕೆ ಅಲ್ಲಾಹನೇ ಸಾಕ್ಷಿಯಾಗಿದ್ದಾನೆ
Surah Al-Hashr, Verse 12
لَأَنتُمۡ أَشَدُّ رَهۡبَةٗ فِي صُدُورِهِم مِّنَ ٱللَّهِۚ ذَٰلِكَ بِأَنَّهُمۡ قَوۡمٞ لَّا يَفۡقَهُونَ
ಒಂದು ವೇಳೆ ಅವರನ್ನು (ಗ್ರಂಥದವರಲ್ಲಿನ ಧಿಕ್ಕಾರಿಗಳನ್ನು) ಹೊರಹಾಕಲಾದರೆ ಇವರೇನೂ ಅವರ ಜೊತೆ ಹೊರಡಲಾರರು ಮತ್ತು ಒಂದು ವೇಳೆ ಅವರ ವಿರುದ್ಧ ಯುದ್ಧ ನಡೆದರೆ ಇವರೇನೂ ಅವರಿಗೆ ನೆರವಾಗಲಾರರು. ಒಂದು ವೇಳೆ ನೆರವಾದರೂ (ಬಹು ಬೇಗನೆ) ಬೆನ್ನು ತಿರುಗಿಸಿ ಓಡುವರು ಮತ್ತು ಅವರಿಗೆ ಎಲ್ಲಿಂದಲೂ ನೆರವು ದೊರಯದು
Surah Al-Hashr, Verse 13
لَا يُقَٰتِلُونَكُمۡ جَمِيعًا إِلَّا فِي قُرٗى مُّحَصَّنَةٍ أَوۡ مِن وَرَآءِ جُدُرِۭۚ بَأۡسُهُم بَيۡنَهُمۡ شَدِيدٞۚ تَحۡسَبُهُمۡ جَمِيعٗا وَقُلُوبُهُمۡ شَتَّىٰۚ ذَٰلِكَ بِأَنَّهُمۡ قَوۡمٞ لَّا يَعۡقِلُونَ
(ವಿಶ್ವಾಸಿಗಳೇ,) ಇದೀಗ ಅವರ ಮನಗಳಲ್ಲಿ ಅಲ್ಲಾಹನಿಗಿಂತ ಹೆಚ್ಚಾಗಿ ನಿಮ್ಮ ಭಯವು ನೆಲೆಸಿದೆ. ಇದೇಕೆಂದರೆ ಅವರು ವಿವೇಚನೆ ಇಲ್ಲದವರಾಗಿದ್ದಾರೆ
Surah Al-Hashr, Verse 14
كَمَثَلِ ٱلَّذِينَ مِن قَبۡلِهِمۡ قَرِيبٗاۖ ذَاقُواْ وَبَالَ أَمۡرِهِمۡ وَلَهُمۡ عَذَابٌ أَلِيمٞ
ಅವರೆಲ್ಲರೂ ಒಂದಾದರೂ ನಿಮ್ಮ ವಿರುದ್ಧ ನೇರ ಯುದ್ಧಕ್ಕೆ ಇಳಿಯಲಾರರು. ಹೆಚ್ಚೆಂದರೆ ಅವರು ಭದ್ರ ಕೋಟೆಗಳಲ್ಲಿ ಅವಿತು ಕೊಂಡು ಅಥವಾ ಗೋಡೆಗಳ ಮರೆಯಿಂದ ಮಾತ್ರ ಹೋರಾಡ ಬಲ್ಲರು. ಅವರ ಪರಸ್ಪರ ವೈಷಮ್ಯವು ತೀವ್ರವಾಗಿದೆ. ಅವರು ಒಗ್ಗಟ್ಟಾಗಿರುವರೆಂದು ನೀವು ಭಾವಿಸುತ್ತೀರಿ. ಆದರೆ ಅವರ ಮನಸ್ಸುಗಳು ಛಿದ್ರವಾಗಿವೆ. ಇದೇಕೆಂದರೆ, ಅವರು ಬುದ್ಧಿ ಉಳ್ಳವರಲ್ಲ
Surah Al-Hashr, Verse 15
كَمَثَلِ ٱلشَّيۡطَٰنِ إِذۡ قَالَ لِلۡإِنسَٰنِ ٱكۡفُرۡ فَلَمَّا كَفَرَ قَالَ إِنِّي بَرِيٓءٞ مِّنكَ إِنِّيٓ أَخَافُ ٱللَّهَ رَبَّ ٱلۡعَٰلَمِينَ
ಅವರ ಸ್ಥಿತಿಯು ಇತ್ತೀಚೆಗಷ್ಟೇ ತಮ್ಮ ಕೃತ್ಯಗಳ ಫಲವನ್ನು ಅನುಭವಿಸಿದ ಅವರ ಹಿಂದಿನವರಂತಿದೆ. ಅವರಿಗಾಗಿ ಕಠಿಣ ಶಿಕ್ಷೆಯು ಸಿದ್ಧವಾಗಿದೆ
Surah Al-Hashr, Verse 16
فَكَانَ عَٰقِبَتَهُمَآ أَنَّهُمَا فِي ٱلنَّارِ خَٰلِدَيۡنِ فِيهَاۚ وَذَٰلِكَ جَزَـٰٓؤُاْ ٱلظَّـٰلِمِينَ
(ಕಪಟಿಗಳ) ಸ್ಥಿತಿಯು ಶೈತಾನನಂತಿದೆ. ಅವನು ಮಾನವನೊಡನೆ ‘‘(ಸತ್ಯವನ್ನು) ದಿಕ್ಕರಿಸು’’ ಎನ್ನುತ್ತಾನೆ. ಮುಂದೆ ಅವನು ಧಿಕ್ಕರಿಸಿದಾಗ, ‘‘ನನಗೆ ನಿನ್ನೊಂದಿಗೆ ಯಾವ ಸಂಬಂಧವೂ ಇಲ್ಲ. ನಾನು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಅಂಜುತ್ತೇನೆ’’ ಎಂದು ಬಿಡುತ್ತಾನೆ
Surah Al-Hashr, Verse 17
يَـٰٓأَيُّهَا ٱلَّذِينَ ءَامَنُواْ ٱتَّقُواْ ٱللَّهَ وَلۡتَنظُرۡ نَفۡسٞ مَّا قَدَّمَتۡ لِغَدٖۖ وَٱتَّقُواْ ٱللَّهَۚ إِنَّ ٱللَّهَ خَبِيرُۢ بِمَا تَعۡمَلُونَ
ಅವರಿಬ್ಬರ ಪಾಲಿಗೂ ನರಕಾಗ್ನಿಯೇ ಅಂತಿಮ ನೆಲೆಯಾಗಿರುವುದು ಮತ್ತು ಅವರು ಸದಾ ಕಾಲ ಅಲ್ಲೇ ಇರುವರು. ಅಕ್ರಮಿಗಳಿಗಿರುವ ಪ್ರತಿಫಲವಿದು
Surah Al-Hashr, Verse 18
وَلَا تَكُونُواْ كَٱلَّذِينَ نَسُواْ ٱللَّهَ فَأَنسَىٰهُمۡ أَنفُسَهُمۡۚ أُوْلَـٰٓئِكَ هُمُ ٱلۡفَٰسِقُونَ
ವಿಶ್ವಾಸಿಗಳೇ, ಅಲ್ಲಾಹನಿಗೆ ಅಂಜಿರಿ. ಮತ್ತು ಪ್ರತಿಯೊಬ್ಬನೂ ತಾನು ನಾಳೆಗಾಗಿ (ಪರಲೋಕಕ್ಕಾಗಿ) ಏನನ್ನು ಮುಂದೆ ಕಳಿಸಿರುವೆನೆಂದು ನೋಡಲಿ. ನೀವು ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ನಿಮ್ಮೆಲ್ಲ ಕರ್ಮಗಳ ಅರಿವುಳ್ಳವನಾಗಿದ್ದಾನೆ
Surah Al-Hashr, Verse 19
لَا يَسۡتَوِيٓ أَصۡحَٰبُ ٱلنَّارِ وَأَصۡحَٰبُ ٱلۡجَنَّةِۚ أَصۡحَٰبُ ٱلۡجَنَّةِ هُمُ ٱلۡفَآئِزُونَ
ನೀವು ಅಲ್ಲಾಹನನ್ನು ಮರೆತವರಂತಾಗಬೇಡಿ. ನಿಜವಾಗಿ ಅವರು ಸ್ವತಃ ತಮ್ಮನ್ನೇ ಮರೆತಿರುವರು. ಅವರೇ ಅವಿಧೇಯರು
Surah Al-Hashr, Verse 20
لَوۡ أَنزَلۡنَا هَٰذَا ٱلۡقُرۡءَانَ عَلَىٰ جَبَلٖ لَّرَأَيۡتَهُۥ خَٰشِعٗا مُّتَصَدِّعٗا مِّنۡ خَشۡيَةِ ٱللَّهِۚ وَتِلۡكَ ٱلۡأَمۡثَٰلُ نَضۡرِبُهَا لِلنَّاسِ لَعَلَّهُمۡ يَتَفَكَّرُونَ
ನರಕದವರು ಮತ್ತು ಸ್ವರ್ಗದವರು ಸಮಾನರಲ್ಲ. ಸ್ವರ್ಗದವರೇ ವಿಜಯಿಗಳು
Surah Al-Hashr, Verse 21
هُوَ ٱللَّهُ ٱلَّذِي لَآ إِلَٰهَ إِلَّا هُوَۖ عَٰلِمُ ٱلۡغَيۡبِ وَٱلشَّهَٰدَةِۖ هُوَ ٱلرَّحۡمَٰنُ ٱلرَّحِيمُ
ಒಂದು ವೇಳೆ ನಾವು ಈ ಕುರ್ಆನನ್ನು ಒಂದು ಪರ್ವತದ ಮೇಲೆ ಇಳಿಸಿದ್ದರೆ, ಅದು ಅಲ್ಲಾಹನಿಗೆ ಅಂಜಿ ಅವನ ಭಯದಿಂದ ಕಂಪಿಸಿ ನುಚ್ಚುನೂರಾಗುವುದನ್ನು ನೀವು ಕಾಣುತ್ತಿದ್ದಿರಿ. ಇವು, ಅವರು ಚಿಂತನೆ ನಡೆಸಲೆಂದು, ನಾವು ಜನರ ಮುಂದಿಡುತ್ತಿರುವ ಉದಾಹರಣೆಗಳು
Surah Al-Hashr, Verse 22
هُوَ ٱللَّهُ ٱلَّذِي لَآ إِلَٰهَ إِلَّا هُوَ ٱلۡمَلِكُ ٱلۡقُدُّوسُ ٱلسَّلَٰمُ ٱلۡمُؤۡمِنُ ٱلۡمُهَيۡمِنُ ٱلۡعَزِيزُ ٱلۡجَبَّارُ ٱلۡمُتَكَبِّرُۚ سُبۡحَٰنَ ٱللَّهِ عَمَّا يُشۡرِكُونَ
ಅವನೇ ಅಲ್ಲಾಹು, ಅವನ ಹೊರತು ಬೇರೆ ಯಾರೂ ಪೂಜಾರ್ಹರಿಲ್ಲ. ಅವನು ಗುಪ್ತವನ್ನೂ ಬಹಿರಂಗವನ್ನೂ ಬಲ್ಲವನು. ಅವನು ಪರಮ ದಯಾಳು, ಕರುಣಾಮಯಿ
Surah Al-Hashr, Verse 23
هُوَ ٱللَّهُ ٱلۡخَٰلِقُ ٱلۡبَارِئُ ٱلۡمُصَوِّرُۖ لَهُ ٱلۡأَسۡمَآءُ ٱلۡحُسۡنَىٰۚ يُسَبِّحُ لَهُۥ مَا فِي ٱلسَّمَٰوَٰتِ وَٱلۡأَرۡضِۖ وَهُوَ ٱلۡعَزِيزُ ٱلۡحَكِيمُ
ಅವನೇ ಅಲ್ಲಾಹು, ಅವನ ಹೊರತು ಬೇರೆ ಯಾರೂ ಪೂಜಾರ್ಹರಿಲ್ಲ. ಅವನು ನೈಜ ದೊರೆಯೂ, ಪರಮ ಪಾವನನೂ, ಶಾಂತಿ ಸ್ವರೂಪನೂ, ಅಭಯದಾತನೂ, ಮೇಲ್ವಿಚಾರಕನೂ, ಪ್ರಬಲನೂ, ಬಲಿಷ್ಠನೂ, ಮಹಾನನೂ ಆಗಿರುವನು. ಅವರು (ಅವನ ದೇವತ್ವದಲ್ಲಿ) ಪಾಲುಗೊಳಿಸುವ ಎಲ್ಲವುಗಳಿಂದ ಅವನು ಮುಕ್ತನು
Surah Al-Hashr, Verse 24